March 28, 2020

ಐವರಿಗೆ ಕೊರೋನಾ ಧೃಡಪಟ್ಟ ಹಿನ್ನಲೆ ನಂಜನಗೂಡು ಸಂಪೂರ್ಣ ಲಾಕ್‍ಡೌನ್!

ಮೈಸೂರು: ಮೈಸೂರಿನಲ್ಲಿ ಇಂದು ಐವರಿಗೆ ಕೊರೊನಾ ವೈರಸ್ ಇರುವುದು ಧೃಡಪಟ್ಟಿದೆ. ನಂಜನಗೂಡು ಸೊಂಕಿತನಿಂದ ಇತರೆ 5 ಮಂದಿಗೆ ಸೊಂಕು ಹರಡಿರುವುದು ಕಂಡುಬಂದ ಹಿನ್ನಲೆ ನಂಜನಗೂಡು ನಗರವನ್ನು ಸಂಪೂರ್ಣ ಲಾಕ್‍ಡೌನ್ ಮಾಡಲಾಗಿದೆ. ನಂಜನಗೂಡಿನ ಸೋಂಕಿತನ ಜೊತೆ ಸಂಪರ್ಕ ಹೊಂದಿದ್ದ ಐವರಲ್ಲಿ ಕೊರೊನಾ ಕಂಡು ಬಂದಿದೆ. ಮೊದಲಿಗೆ ನಂಜನಗೂಡಿನ ಜುಬಿಲೆಟ್ಸ್ ಕಾರ್ಖಾನೆಯ ಉದ್ಯೋಗಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಇದೀಗ ಒಂದೇ ಕಾರ್ಖಾನೆಯ ಐವರಲ್ಲಿ ಕೊರೊನಾ ಸೋಂಕು ದೃಢಪಟ್ಟಿರೋದು ಆತಂಕಕ್ಕೆ ಕಾರಣವಾಗಿದೆ. ಇನ್ನು ಕಾರ್ಖಾನೆಯ ಸಿಬ್ಬಂದಿಯ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ. […]

ಐವರಿಗೆ ಕೊರೋನಾ ಧೃಡಪಟ್ಟ ಹಿನ್ನಲೆ ನಂಜನಗೂಡು ಸಂಪೂರ್ಣ ಲಾಕ್‍ಡೌನ್! Read More »

ಮೈಸೂರಿನಲ್ಲಿ ಮತ್ತೆ ಐವರಿಗೆ ಕೊರೋನಾ ಪಾಸಿಟಿವ್..! ಸೋಂಕಿತರ ಸಂಖ್ಯೆ 8ಕ್ಕೆ ಏರಿಕೆ!

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೋನಾ ಪೀಡಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಇಂದು ಮತ್ತೆ 5 ಕೊರೊನಾ ಪಾಸಿಟಿವ್ ಪ್ರಕರಣ ಧೃಡಪಟ್ಟಿದೆ. ನಂಜನಗೂಡು ಸೊಂಕಿತನಿಂದ ಇತರೆ 5 ಮಂದಿಗೆ ಸೊಂಕು ಹರಡಿದೆ. ಈ ಮೂಲಕ ಮೈಸೂರಿನಲ್ಲಿ ಒಟ್ಟು ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 8ಕ್ಕೇರಿದೆ. ಹೊಸ 5 ಮಂದಿ ನಂಜನಗೂಡಿನ ಜುಬಿಲೆಟ್ಸ್ ಕಾರ್ಖಾನೆ ಕಾರ್ಮಿಕರು ಎಂದು ತಿಳಿದುಬಂದಿದ್ದು ಮೈಸೂರು ಜಿಲ್ಲಾಡಳಿತದಿಂದ ಅಧಿಕೃತ ಮಾಹಿತಿ‌ ದೊರೆತಿದೆ..

ಮೈಸೂರಿನಲ್ಲಿ ಮತ್ತೆ ಐವರಿಗೆ ಕೊರೋನಾ ಪಾಸಿಟಿವ್..! ಸೋಂಕಿತರ ಸಂಖ್ಯೆ 8ಕ್ಕೆ ಏರಿಕೆ! Read More »

80ರ ದಶಕದ ಜನಪ್ರಿಯ ಧಾರಾವಾಹಿ ‘ರಾಮಾಯಣ’ ಇಂದಿನಿಂದ ಮರುಪ್ರಸಾರ

ನವದೆಹಲಿ: ದೂರದರ್ಶನದಲ್ಲಿ 80ರ ದಶಕದಲ್ಲಿ ಪ್ರಸಾರವಾಗುತ್ತಿದ್ದ, ಜನಪ್ರಿಯ ಧಾರಾವಾಹಿ ‘ರಾಮಾಯಣ’ ಇಂದಿನಿಂದ(ಮಾ. 28ರಿಂದ) ಮರುಪ್ರಸಾರವಾಗಲಿದೆ. ಕೊರೊನಾ ಭೀತಿಯಿಂದ ದೇಶಾದ್ಯಂತ ಲಾಕ್​ ಡೌನ್​ನಿಂದಾಗಿ ಜನರು ಮನೆಯಲ್ಲಿಯೇ ಕುಳಿತು ಏನು ಮಾಡುವುದೆಂಬ ಚಿಂತೆಯಲ್ಲಿದ್ದಾರೆ. ಈಗ ಜನರ ಮನರಂಜನೆಗಾಗಿ ದೂರದರ್ಶನದಲ್ಲಿ ಜನಪ್ರಿಯ ‘ರಾಮಾಯಣ’ ಧಾರವಾಹಿಯನ್ನು ಮತ್ತೆ ಪ್ರಾರಂಭಿಸಲು ನಿನ್ನೆಯಷ್ಟೇ ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಹಾಗಾಗಿ, ಇಂದಿನಿಂದಲೇ ಜನರು ಮನೆಯಲ್ಲಿ ಕುಳಿತು ರಾಮಾಯಣವನ್ನು ವೀಕ್ಷಿಸಬಹುದು. ದಿನಕ್ಕೆ 2 ಬಾರಿಯಂತೆ ‘ರಾಮಾಯಣ’ ಧಾರಾವಾಹಿ ಪ್ರಸಾರವಾಗಲಿದೆ. ಮುಂಜಾನೆ 9.00ಗಂಟೆಗೆ ಹಾಗೂ ರಾತ್ರಿ 9.00 ಗಂಟೆಗೆ ಪ್ರಸಾರವಾಗಲಿದೆ.

80ರ ದಶಕದ ಜನಪ್ರಿಯ ಧಾರಾವಾಹಿ ‘ರಾಮಾಯಣ’ ಇಂದಿನಿಂದ ಮರುಪ್ರಸಾರ Read More »

Scroll to Top