
ಗುಜರಾತ್: ಒಡಿಶಾ ರಾಜ್ಯಕ್ಕೆ ಫೋನಿ ಚಂಡಮಾರುತ ಅಪ್ಪಳಿಸಿದ ಬೆನ್ನಲ್ಲೇ ಇದೀಗ ವಾಯು ಚಂಡಮಾರುತ ಗುರುವಾರ ಗುಜರಾತ್ ಕರಾವಳಿ ಪ್ರವೇಶಿಸಲಿದ್ದು ರಾಜ್ಯದ ಜನರು ಎಚ್ಚರಿಕೆಯಿಂದ ಇರಲು ಭಾರತೀಯ ಹವಾಮಾನ ಇಲಾಖೆ ಸೂಚಿಸಿದೆ.
ವಾಯುಭಾರ ಕುಸಿತದಿಂದ ಅರೇಬಿಯನ್ ಸಮುದ್ರದಲ್ಲಿ ವಾಯು ಚಂಡಮಾರುತ ಎದ್ದಿದೆ. ಗುರುವಾರ ಗುಜರಾತ್ ತೀರ ಪ್ರದೇಶಗಳಿಗೆ ಅಪ್ಪಳಿಸುವ ಮೂಲಕ ರಾಜ್ಯಾದ್ಯಂತ ಭಾರಿ ಗಾಳಿ, ಮಳೆ ಉಂಟಾಗಲಿದೆ. ಗುಜರಾತ್ನ ಪೋರ್ಬಂದರ್, ಮಹುವಾ, ವೆರಾವಲ್ ಮತ್ತು ದಿಯು ಪ್ರದೇಶಗಳಿಗೆ ಸುಮಾರು 110ರಿಂದ 120 ಕಿಮೀ ವೇಗದಲ್ಲಿ ಪ್ರವೇಶಿಸುವ ‘ವಾಯು’ ನಂತರ 135 ಕಿಮಿವರೆಗೂ ವೇಗ ಹೆಚ್ಚಿಸಿಕೊಂಡು ಬೀಸಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
Very heavy winds along with rainfall in coastal Saurashtra
— Sandeep Chavda (@sandeep_chavda) June 12, 2019
Be indoor be safe#CycloneVayu #VayuCyclone pic.twitter.com/b6gfHRvvsq
ಇಂದು ಗುಜರಾತ್ನ ಉತ್ತರ ಭಾಗಗಳಾದ ಬನಸ್ಕಾಂತಾ ಮತ್ತು ಸಬರ್ಕಾಂತಾ ಪ್ರದೇಶಗಳಲ್ಲಿ ಗುಡುಗು, ಮಿಂಚು ಜತೆ 30-40 ಕಿಮಿ ವೇಗದಲ್ಲಿ ಅತಿಯಾಗಿ ಗಾಳಿ ಬೀಸುತ್ತಿದ್ದು ಈ ವಾತಾವರಣ ನಾಳೆಯೂ ಮುಂದುವರಿಯಲಿದೆ.
ಈಗಾಗಲೇ ಗುಜರಾತ್ ನಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ತಗ್ಗು ಪ್ರದೇಶಗಳಲ್ಲಿ ವಾಸಿಸುವ ಸುಮಾರು 3 ಲಕ್ಷ ಜನರನ್ನು ಸ್ಥಳಾಂತರಿಸುವ ಸಾಧ್ಯತೆಯಿದ್ದು, 700 ಆಶ್ರಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅಲ್ಲದೆ, ಜೂನ್ 15ರ ವರೆಗೆ ರಾಜ್ಯಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಕರ್ನಾಟಕದಲ್ಲೂ ಭಾರಿ ಮಳೆ ಸಾಧ್ಯತೆ:
ವಾಯು ಚಂಡಮಾರುತ ಪ್ರವೇಶದಿಂದಾಗಿ ಗುಜರಾತ್, ಕರ್ನಾಟಕ ಮತ್ತು ಕೇರಳದ ಕರಾವಳಿ ಪ್ರದೇಶಗಳಲ್ಲಿ ಭೂಕುಸಿತ ಉಂಟಾಗುವ ಸಾಧ್ಯತೆಗಳಿವೆ. ಅಲ್ಲದೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
You must be logged in to post a comment.