ಕೊಡಗಿನಲ್ಲಿ ಭೂಕುಸಿತ; ಮೂವರು ಸಾವು, ಇಬ್ಬರು ಮಣ್ಣಿನಡಿ ಸಿಲುಕಿರುವ ಶಂಕೆ

ಕೊಡಗು: ಕೊಡಗು ಜಿಲ್ಲೆಯಲ್ಲಿ ಮಹಾಮಳೆ ಮುಂದುವರೆದಿದ್ದು ಭೂ ಕುಸಿತಕ್ಕೆ ಮೂವರು ಬಲಿಯಾಗಿದ್ದಾರೆ.

ಮಡಿಕೇರಿ ತಾಲೂಕಿನ ಭಾಗಮಂಡಲ ಸಮೀಪದ ಕೊರಂಗಾಲ ಬಳಿ ಈ ಘಟನೆ ನಡೆದಿದ್ದು ಭೂ ಕುಸಿತಕ್ಕೆ ಮೂವರು ಬಲಿಯಾಗಿದ್ದಾರೆ. ಇನ್ನು ಘಟನೆಯಲ್ಲಿ ಮತ್ತಿಬ್ಬರು ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು ಕೇಂದ್ರ ಸಚಿವ ಸದಾನಂದಗೌಡ ಮೃತರ ಕುಟುಂಬಕ್ಕೆ 5 ಲಕ್ಷ ರೂ.ಪರಿಹಾರ ಘೋಷಿಸಿದ್ದಾರೆ.

ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು ಹಲವೆಡೆ ಮುಳುಗಡೆ ಪ್ರದೇಶದಲ್ಲಿ ಸಿಲುಕಿದ ಜನರನ್ನು NDRF ತಂಡ, ಕೊಡಗು ಪೋಲಿಸರಿಂದ ರಕ್ಷಣೆ ಮಾಡುತಿದ್ದಾರೆ. ಈಗಾಗಲೆ 20ಕ್ಕೂ ಹೆಚ್ಚು ಗ್ರಾಮದ ನಿವಾಸಿಗಳ ರಕ್ಷಣೆ ಮಾಡಲಾಗಿದೆ.

Scroll to Top