
ಮೈಸೂರು: ಮೈಸೂರು ಮೃಗಾಲಯದಲ್ಲಿ ಶುಕ್ರವಾರ ಆನೆ ದಾಳಿಗೆ ಮಾವುತರೊಬ್ಬರು ಮೃತಪಟ್ಟಿದ್ದಾರೆ.
ಲಲಿತಾದ್ರಿಪುರ ನಿವಾಸಿ ಹರೀಶ್ (35) ಮೃತ ವ್ಯಕ್ತಿ. ಕಳೆದ 5 ದಿನಗಳಿಂದ ರಜೆ ಮೇಲೆ ತೆರಳಿದ್ದ ಹರೀಶ್ ಇಂದು ಕೆಲಸಕ್ಕೆ ಹಾಜರಾಗಿದ್ದರು. ಮದ್ಯಾಹ್ನ ಎಂದಿನಂತೆ ಆನೆಯ ಮೈದಡವಿ ಹುಲ್ಲು ಹಾಕುವ ಸಂದರ್ಭದಲ್ಲಿ ವೇಳೆ ದಿಢೀರಾಗಿ ದಾಳಿ ನಡೆಸಿದೆ.

ಆನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಹರೀಶ್ರನ್ನು ಅಲ್ಲಿದ್ದ ಸಿಬ್ಬಂದಿ ಆನೆಯಿಂದ ಬಿಡಿಸಿಕೊಂಡು ಕೂಡಲೇ ಗೋಪಾಲಗೌಡ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಹರೀಶ್ ಮೃತಪಟ್ಟಿದ್ದಾರೆ.

You must be logged in to post a comment.