ಚಾಮುಂಡಿ ಬೆಟ್ಟಕ್ಕೆ ಹೋಗುತ್ತಿದ್ದ ಬಸ್ ಬ್ರೆಕ್ ಫೇಲ್: ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿತು ಭಾರಿ ಅನಾಹುತ

ಮೈಸೂರು: ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ಒಂದು ತಪ್ಪಿದ್ದು, ಚಾಮುಂಡಿ ಬೆಟ್ಟಕ್ಕೆ ಹೋಗುತ್ತಿದ್ದ ಬಸ್ಸೊಂದರ ಬ್ರೆಕ್ ಫೇಲ್ ಆಗಿ ತಡೆಗೋಡೆಗೆ ಗುದ್ದಿದೆ.

ಹೌದು. ಇಂದು ಕೊನೆ ಆಶಾಡ ಶುಕ್ರವಾರವಾದ ಕಾರಣ ಸಾಕಷ್ಟು ಭಕ್ತರು ಚಾಮುಂಡಿ ಬೆಟ್ಟಕ್ಕೆ ಬಸ್ ಮೂಲಕ ತೆರಳುತ್ತಿದ್ದರು. ನಗರ ಸಾರಿಗೆ ಬಸ್ ಒಂದರ ಬ್ರೇಕ್ ಏರ್ ಪೈಪು ತುಂಡಾದ ಕಾರಣ ಬ್ರೆಕ್ ಫೇಲ್ ಆಗಿ ಬಸ್ ಕ್ಷಣಾರ್ಧದಲ್ಲಿ ಹಿಮ್ಮುಖವಾಗಿ ಚಲಿಸತೊಡಗಿದೆ. ಈ ವೇಳೆ ಚಾಲಕ ಸಮಯ ಪ್ರಜ್ಞೆ ಮೆರೆದ ಕಾರಣ ಬಸ್ ತಡೆಗೋಡೆಗೆ ಗುದ್ದಿ ನೀಂತಿದೆ.

ಒಟ್ಟಾರೆ ಚಾಲಕನ ಸಮಯ ಪ್ರಜ್ಞೆಯಿಂದಾಗಿ ಕಂದಕಕ್ಕೆ ಉರುಳ ಬೇಕಾದ ಬಸ್ ತಡೆಗೊಡೆಗೆ ಹೊಡೆದ ನಿಂತಿದ್ದು ಭಾರಿ ಅನಾಹುತ ತಪ್ಪಿದೆ.

Scroll to Top