
ಮೈಸೂರು: ಮೈಸೂರಿನಲ್ಲಿ ಕೊರೋನಾ ತೀವ್ರತೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವ ಹಿನ್ನಲೆ ಶೀಘ್ರದಲ್ಲೇ ಮೈಸೂರು ಆರೆಂಜ್ ಝೋನ್ ಆಗಲಿದೆ ಎಂದು ಜಿಲ್ಲಾ ಉಸ್ತುವಾರಿ ಎಸ್.ಟಿ.ಸೋಮಶೇಖರ್ ಅವರು ಭರವಸೆ ನೀಡಿದ್ದಾರೆ
ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿಂದು ಮಾದ್ಯಮಗಳೊಂದಿಗೆ ಮಾತನಾಡಿದ ಅವರು ಮೈಸೂರನ್ನು ಆರೇಂಜ್ ವಲಯವನ್ನಾಗಿ ಮಾಡಿ ಎಂದು ಒತ್ತಾಯ ಮಾಡಿದ್ದೇವೆ. ಸದ್ಯಕ್ಕೆ ಆರೇಂಜ್ ವಲಯವಾಗಲಿದ್ದು, ವಾರದಲ್ಲೇ ಮೈಸೂರು ಕೊರೋನಾ ಮುಕ್ತವಾಗುವ ಸಾಧ್ಯತೆ ಇದೆ.
ಈಗಾಗಲೇ ಕೊರೋನಾ 90 ಪಾಸಿಟಿವ್ ಪ್ರಕರಣದಿಂದ 7ಕ್ಕೆ ಬಂದಿದೆ. ಆದ್ದರಿಂದ ಆದಷ್ಟು ಬೇಗ ಶೂನ್ಯಕ್ಕೆ ಇಳಿಯಲಿದೆ. ಹೀಗಾಗಿ ರೆಡ್ ಝೋನ್ ನಿಂದ ಆರೆಂಜ್ ಝೋನ್ ಆಗಿ ಪರಿವರ್ತಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದ್ದು, ಶೀಘ್ರ ನಿರ್ಧಾರ ಹೊರಬೀಳಲಿದೆ. ಮುಂದೆ ಪರಿಸ್ಥಿತಿ ನೋಡಿಕೊಂಡು ಗ್ರೀನ್ ಝೋನ್ ಗೆ ತರುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ತಿಳಿಸಿದರು.
@CMofKarnataka ಮೈಸೂರು ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿದ ನಂತರ ಇದುವರೆಗೆ ಯಶವಂತಪುರ ವಿ ಕ್ಷೇತ್ರ & ಇತರ ಸಚಿವರಿಂದ ಮೃಗಾಲಯಕ್ಕೆ 2,31,60,000 ರೂ ದೇಣಿಗೆಯಾಗಿ ನೀಡಿದಂತಾಗಿದೆ.
— S T Somashekar Gowda (@STSomashekarMLA) May 7, 2020
ಕೆ.ಆರ್.ಪುರಂ ವಿ ಕ್ಷೇತ್ರದ ವತಿಯಿಂದ ಸಚಿವರಾದ @BASAVARAJAMLA ಅವರು ಇಂದು 84 ಲಕ್ಷ ರೂ ಚೆಕ್ ಅನ್ನು ಮೃಗಾಲಯಕ್ಕೆ ಹಸ್ತಾಂತರಿಸಿದರು.@mepratap pic.twitter.com/GyZ5oQpeSP
You must be logged in to post a comment.