ಮನೆ ಮನೆಗೆ ತೆರಳಿ ಸ್ವಚ್ಛ ಸರ್ವೇಕ್ಷಣ ವಿಶೇಷ ಆಂದೋಲನ

ಸ್ವಚ್ಛ ಸರ್ವೇಕ್ಷಣ

ಮೈಸೂರು: ಸ್ವಚ್ಛ ಸರ್ವೇಕ್ಷಣ 2019ರ ವಿಶೇಷ ಆಂದೋಲನವನ್ನು ಮೈಸೂರು ಮಹಾಗರ ಪಾಲಿಕೆ ಹಮ್ಮಿಕೊಂಡಿದೆ. ಈ ಆಂದೋಲನಕ್ಕೆ ಪಾಲಿಕೆ ಸದಸ್ಯರು ಸಹ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.

ಗುರುವಾರ ವಾರ್ಡ್ ಸಂಖ್ಯೆ 23 ರ ಪಾಲಿಕೆ ಸದಸ್ಯರಾದ ಪ್ರಮಿಳಾ ಭರತ್ ಅವರು ಬಿಡಾರ ಕೃಷ್ಣಪ್ಪ ರಸ್ತೆಯಲ್ಲಿ ಮನೆ ಮನೆಗೆ ತೆರಳಿ, ಜಾಗೃತಿ ಮೂಡಿಸಿದರು. ಮಹಾನಗರ ಪಾಲಿಕೆ ಪ್ರಕಟಿಸಿರುವ ಕರಪತ್ರಗಳನ್ನು ವಿತರಿಸಿ, ಮೂಲದಲ್ಲೇ ಹಸಿ ಕಸ ಮತ್ತು ಒಣ ಕಸ ವಿಂಗಡಿಸುವ ಬಗ್ಗೆ ಜಾಗೃತಿ ಮೂಡಿಸಿದರು.

Scroll to Top